ಕನ್ನಡ ಸೌರಭ ಸಂಘದ ವರದಿ:

Kannada-Sourabha

2022-2023 ಆಗಸ್ಟ್ 26 ರಂದು ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾನ್ಯ ಪ್ರಾಂಶುಪಾಲರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಅಂದು ಕನ್ನಡ ಸಂಘದ ಸೌರಭಕ್ಕೆ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು 7 ರಿಂದ 10ನೇ ತರಗತಿಗಳ ತಲಾ ಇಬ್ಬರಂತೆ ಸದಸ್ಯರನ್ನು ನೇಮಕ ಮಾಡಲಾಯಿತು. ಆ ಎಲ್ಲ ಪದಾಧಿಕಾರಿಗಳಿಗೆ ನಮ್ಮ ಮಾನ್ಯ ಪ್ರಾಂಶುಪಾಲರು ಗುರುತಿನ ಫಲಕಗಳನ್ನು ವಿತರಿಸಿ ಅವರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿಸಿ ಕೊಟ್ಟರು. ಹೀಗೆ ನಮ್ಮ ಕನ್ನಡ ಸಂಘ ಸೌರಭದ ಸದಸ್ಯರು ಹಲವಾರು ಚಟುವಟಿಕೆಗಳನ್ನು ನೆರವೇರಿಸಲು ಉತ್ಸುಕರಾಗಿದ್ದಾರೆ. ನಮ್ಮ ಕನ್ನಡ ಸಂಘ ಸೌರಭದ ಉದ್ದೇಶ ಪ್ರತಿಯೊಬ್ಬರಲ್ಲಿ ಕನ್ನಡ ಅಭಿಮಾನ ಬೆಳೆಸಿ ಇನ್ನು ಹೆಚ್ಚಿನ ಚಟುವಟಿಕೆಗಳನ್ನು ನಡೆಸಿಕೊಡುವುದಾಗಿದೆ.